ಮೋದಿ ಸರಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್!

Mallikarjun Kharge

Mallikarjun Kharge

ಮಲ್ಲಿಕಾರ್ಜುನ ಖರ್ಗೆ

ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ (ಜನನ 21 ಜುಲೈ 1942) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ಪ್ರಸ್ತುತ ಸಂಸತ್ತಿನ ಸದಸ್ಯರಾಗಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆ ಮತ್ತು 16 ಫೆಬ್ರವರಿ 2021 ರಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಅವರು ಮಾಜಿ ರೈಲ್ವೆ ಸಚಿವರು ಮತ್ತು ಕಾರ್ಮಿಕ ಸಚಿವರು ಮತ್ತು ಭಾರತ ಸರ್ಕಾರದಲ್ಲಿ ಉದ್ಯೋಗ.

ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ರಾಜಕೀಯ ಪಕ್ಷದ ಸದಸ್ಯರಾಗಿದ್ದಾರೆ ಮತ್ತು 2009-2019 ರ ಅವಧಿಯಲ್ಲಿ ಕರ್ನಾಟಕದ ಗುಲ್ಬರ್ಗಾ ಸಂಸದರಾಗಿದ್ದರು.

Mallikarjun Kharge

ಅವರು ಕರ್ನಾಟಕದ ಹಿರಿಯ ರಾಜಕಾರಣಿ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಅವರು 2008 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.

ಸತತ 10 ಬಾರಿ ಚುನಾವಣೆಯಲ್ಲಿ ಗೆದ್ದು ದಾಖಲೆಯ 10 ಬಾರಿ ಅಸೆಂಬ್ಲಿ ಚುನಾವಣೆಗಳನ್ನು ಅಭೂತಪೂರ್ವವಾಗಿ ಸತತ 9 ಬಾರಿ ಗೆದ್ದಿದ್ದಾರೆ (1972, 1978, 1983, 1985, 1989, 1994, 1999, 2004, 2008, 20020 ರ ಸಾರ್ವತ್ರಿಕ ಚುನಾವಣೆಗಳಲ್ಲಿ 9 ವಿರುದ್ಧ ಸೋತಿದ್ದಾರೆ) ಗುಲ್ಬರ್ಗದಿಂದ ಉಮೇಶ ಜಾಧವ್.

2014-2019ರ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು.

ಖರ್ಗೆ ವಾಗ್ದಾಳಿ

“ರಾಜ್ಯದಲ್ಲಿ ಬಿಜೆಪಿ ಸರ್ಕಾರ ಎಲ್ಲದಕ್ಕೂ ದರವನ್ನು ನಿಗದಿ ಮಾಡಿದೆ” ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಹುಮನಾಬಾದ್ ಪಟ್ಟಣದ ರಸ್ತೆಯ ಪ್ರಯಾಗ್ ಫಂಕ್ಷನ್ ಹಾಲ್ನಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕು ಘಟಕದ ವತಿಯಿಂದ ರವಿವಾರ ಆಯೋಜನೆಯನ್ನು ಮಾಡಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಂತ್ರಿ ಹಾಗು ಮುಖ್ಯಮಂತ್ರಿಯನ್ನಾಗಿ ಮಾಡಲು ನೂರಾರು ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ.

ಮಠ ಮಾನ್ಯಗಳಿಗೂ ಅನುದಾನ ನೀಡಲು ಶೇಕಡಾ 30 ಮತ್ತು ಗುತ್ತಿಗೆದಾರರ ಕೆಲಸಕ್ಕೆ ಶೇ 40 ರಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಬಲವಾದ ಆರೋಪವು ಕೇಳಿ ಬರುತ್ತಿದೆ.

Mallikarjun Kharge

ಹಿಂಗಾದ್ರೆ ರಾಜ್ಯದ ಪರಿಸ್ಥಿತಿ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ, ಕಲ್ಯಾಣ ಕರ್ನಾಟಕದ ಭಾಗದ

ಜನರಿಗೆ ಇರುವ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಇಂದಿರಾ ಗಾಂಧಿ ಅವರಿಗೆ ಮನವರಿಕೆಯನ್ನು ಮಾಡಿಕೊಟ್ಟು 371(ಜೆ) ತಿದ್ದುಪಡಿ ಕಾಯ್ದೆ ತಂದಿದ್ದವರ ಪರಿಣಾಮ ಈ ಭಾಗದ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತವನ್ನು ನಡೆಸುತ್ತಿರುವ ಬಿಜೆಪಿ ಜನರಿಗೆ ಏನು ಕೊಡುಗೆ ನೀಡಿದೆ? ನರೇಗಾದಡಿ ಕೇವಲ 49 ದಿನ ಕೆಲಸವನ್ನು ಮಾತ್ರ ನೀಡಲಾಗುತ್ತಿದೆ.

ಈ ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಕೇವಲ 77 ಸಾವಿರ ಕೋಟಿ ಮೀಸಲಿಟ್ಟು ಅರ್ಧದಷ್ಟು ಅನುದಾನವನ್ನು ಕಡಿತಗೊಳಿಸಲಾಗಿದೆ.

ಬೀದರ ಜಿಲ್ಲೆಯ ಶಾಸಕ ಈಶ್ವರ್ ಖಂಡ್ರೆ ಪ್ರತಿನಿಧಿಸುವ ಭಾಲ್ಕಿ ತಾಲೂಕಿನ ವರವಟ್ಟಿ ನನ್ನ ಹುಟ್ಟೂರು ಆಗಿರುವುದು ನನಗೆ ಹೆಮ್ಮೆ ಇದೆ, ಎಷ್ಟೇ ಎತ್ತರಕ್ಕೂ ಬೆಳೆದರು ಕೂಡ ತವರಿನ ಅಭಿಮಾನ ಇದ್ದೆ ಇರುತ್ತದೆ.

ಇದರ ಜೊತೆಗೆ ನಾನು ಪ್ರತಿನಿಧಿಸುವ ಗುರಮಠಕಲ್, ಕಲಬುರ್ಗಿ ಕ್ಷೇತ್ರದ ಬಗ್ಗೆಯೂ ಅಭಿಮಾನ ಮತ್ತು ಕಾಳಜಿ ಇದೆ ಎಂದು ಖರ್ಗೆ ತಿಳಿಸಿದ್ದಾರೆ.

ಬೀದರ ಜಿಲ್ಲೆಯ ಶಾಸಕ ರಹೀಮ್ ಖಾನ್, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಸವರಾಜ್ ಜಾಬಶೆಟ್ಟಿ, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಚಂದ್ರಶೇಖರ್ ಪಾಟೀಲ್, ಅರವಿಂದ ಅರಳಿ, ಮುಖಂಡರಾದ ಶರಣು ಮೋದಿ, ಮಾಲಾ ನಾರಾಯಣ.

ಮತ್ತು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಜಗದೇವ್ ಗುತ್ತೇದಾರ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ತಿನ ಮಾಜಿ ಸಂಸದ ಪುಂಡಲೀಕ್ ರಾವ್, ಬಸವರಾಜ್ ಬುಳ್ಳ, ಮೀನಾಕ್ಷಿ ಸಂಗ್ರಾಮ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕ ಸಮಿತಿ ಅಧ್ಯಕ್ಷ ಹಣಮಂತ ರಾವ್ ಚೌಹಾಣ್ ಸ್ವಾಗತಿಸಿದರು.

“ಒನ್ಸ್ ಮೋರ್ ಮೋದಿ” ಕೂಗಿಗೆ ಮೋದಿ ಫುಲ್ ಫಿದಾ!  

https://jcs.skillindiajobs.com/

Social Share

Leave a Reply

Your email address will not be published. Required fields are marked *