Rachita Ram Kidnap
ರಚಿತಾ ರಾಮ್
ಕನ್ನಡ ಚಿತ್ರರಂಗಕ್ಕೆ ಬುಲ್ಬುಲ್ನೊಂದಿಗೆ ದರ್ಶನ್ ಎದುರು ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು.
ಅವರು ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಗು ಜನಪ್ರಿಯ ನಟಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಕನ್ನಡ ಚಲನಚಿತ್ರಕ್ಕೆ ಪ್ರವೇಶಿಸುವ ಮೊದಲು, ಇವರು ಜನವರಿ 2007 ರಿಂದ ಸೆಪ್ಟೆಂಬರ್ 2009 ರವರೆಗೆ ಜೀ ಕನ್ನಡದಲ್ಲಿ ಪ್ರಸಾರವಾದ ಕನ್ನಡ ದೂರದರ್ಶನ ಸೋಪ್ ಒಪೆರಾ ಅರಸಿಯಲ್ಲಿ ಕಾಣಿಸಿಕೊಂಡರು.Rachita Ram Kidnap
ಅವರು ಫಿಲ್ಮ್ಫೇರ್ ಪ್ರಶಸ್ತಿ ಹಾಗೂ ಮೂರು SIIMA ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.
ದಿಲ್ ರಂಗೀಲಾ (2014) ಹಾಗೂ ಅಂಬರೀಶ್ (2014) ನಲ್ಲಿ ಕಾಣಿಸಿಕೊಂಡ ನಂತರ, ಅವರು ರನ್ನ, ಚಕ್ರವ್ಯೂಹ, ಪುಷ್ಪಕ ವಿಮಾನ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ.
ಮತ್ತು ನಟಸಾರ್ವಭೌಮ, ರುಸ್ತುಂ ಮತ್ತು ಆಯುಷ್ಮಾನ್ ಭವ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ತೆಲುಗಿನಲ್ಲಿ ಮೊಟ್ಟ ಮೊದಲು ಸೂಪರ್ ಮಾಚಿ ಚಿತ್ರವನ್ನು (2022) ಮೂಲಕ ಚೊಚ್ಚಲ ಚಿತ್ರದಲ್ಲಿ ನಟಿಸಿದ್ದಾರೆ.
ರಚಿತಾ ಕನ್ನಡ ಚಿತ್ರರಂಗದ ‘ಡಿಂಪಲ್ ಗರ್ಲ್’ ಎಂದು ಕರೆಸಿಕೊಳ್ಳುವ ಹಾಗೂ ತಮ್ಮ ವಿಭಿನ್ನ ಪಾತ್ರಗಳಿಗಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದ್ದಾರೆ.Rachita Ram Kidnap
ಶೂಟಿಂಗ್ ಸಲುವಾಗಿ ಸ್ಟುಡಿಯೋಗೆ ತೆರಳಲು ನಟಿ ರಚಿತಾ ರಾಮ್ ಅವರು ಕಾರಿನಲ್ಲಿ ಕುಳಿತುಕೊಂಡು, ಸ್ಟುಡಿಯೋಗೆ ತೆರಳುವಂತೆ ಡ್ರೈವರ್ಗೆ ಹೇಳುತ್ತಾರೆ.rachita kidnap
ರಚಿತಾ ಅಪಹರಣ
ಆಗ ಅವರಿಗೆ ಒಂದು ಶಾಕ್ ಎದುರಾಗುತ್ತದೆ, ಹಿಂಬದಿಯ ಸೀಟ್ನಲ್ಲಿ ಕುಳಿತುಕೊಂಡ ಇಬ್ಬರು ಗನ್ ತೋರಿಸಿ, ‘ಏ ಹುಡುಗಿ.. ನೀನು ಎಲ್ಲಿ ಹೋಗಬೇಕು ಅಂತ ನಾವು ಡಿಸೈಡ್ ಮಾಡ್ತೀವಿ’ ಅಂತ ಬೆದರಿಕೆ ಹಾಕುತ್ತಾರೆ.
ಇದೆಲ್ಲ ಏನು ಎಂಬಂತೆ ಡ್ರೈವರ್ ಕಡೆಗೆ ರಚಿತಾ ಪ್ರಶ್ನೆಗಳನ್ನೂ ಕೇಳುತ್ತಾರೆ, ಡ್ರೈವರ್ ಕೆಕ್ಕರಿಸಿ ನೋಡುತ್ತಾನೆ.rachita ram movies
ಆಗ ಶುರುವಾಗುತ್ತದೆ ರಚಿತಾಗೆ ಅಸಲಿ ಸಂಕಟ. ಅಷ್ಟು ಹೊತ್ತಿಗಾಗಲೇ ಅವರು ಅಪಹರಣಕಾರರ ಹಿಡಿತದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಖಚಿತವಾಗಿರುತ್ತದೆ.
ರಚಿತಾ ಅವರನ್ನು ಸ್ಟುಡಿಯೋ ಬದಲಿಗೆ ಏರ್ಪೋರ್ಟ್ಗೆ ಕರೆದುಕೊಂಡು ಹೋಗಲಾಗುತ್ತದೆ, ಇದು ರಚಿತಾ ರಾಮ್ ಕಿಡ್ನಾಪ್ ಆಗುವ ದೃಶ್ಯ.
ಹಾಗಂತ ಅವರು ನಿಜವಾಗಿಯೂ ಅಪಹರಣಕ್ಕೆ ಸಿಲುಕಿಲ್ಲ, ಇದೊಂದು ಡ್ರಾಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಡ್ರಾಮಾ ಜ್ಯೂನಿಯರ್ಸ್ 4’ ಕಾರ್ಯಕ್ರಮದ ಪ್ರೋಮೋ.rachita in drama juniors 4
ಈ ಹಿಂದೆ ನಟ ರವಿಚಂದ್ರನ್ ಅವರನ್ನು ಮಕ್ಕಳು ಕಿಡ್ನಾಪ್ ಮಾಡುವಂತಹ ರೀತಿಯಲ್ಲಿ ಪ್ರೋಮೋ ತಯಾರಿಸಲಾಗಿತ್ತು, ಈಗ ಅದೇ ರೀತಿ ರಚಿತಾ ರಾಮ್ ಕಿಡ್ನಾಪ್ ಕಹಾನಿಯನ್ನು ಜನರ ಮುಂದೆ ಹೀಗೆ ಮಾಡಲಾಗಿದೆ.
ಅಪಹರಣ ಮಾಡಿದವರ ಕೈಗೆ ಸಿಕ್ಕ ರಚಿತಾ ರಾಮ್ ಅವರು ವಿಮಾನವನ್ನು ಹತ್ತುತ್ತಾರೆ, ಅಲ್ಲಿ ಬರೀ ಮಕ್ಕಳದ್ದೇ ಸಾಮ್ರಾಜ್ಯ.
‘ನನ್ನನ್ನು ಯಾರೋ ಕಿಡ್ಯಾಪ್ ಮಾಡಿದ್ದಾರೆ, ದಯವಿಟ್ಟು ಸಹಾಯ ಮಾಡಿ..’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಬಳಿ ಮನವಿಯನ್ನು ಮಾಡಿಕೊಂಡರು.dramajuniors season 4
ರಚಿತಾ ಅವರನ್ನು ಎಷ್ಟೇ ಮನವಿ ಮಾಡಿಕೊಂಡರು ಅದು ಪ್ರಯೋಜನ ಆಗುವುದಿಲ್ಲ, ಕಡೆಗೂ ವಿಮಾನದ ಒಳಗೆ ಬಂದು ಕುಳಿತಾಗ ಅಲ್ಲಿ ರವಿಚಂದ್ರನ್ ಕುಳಿತಿರುತ್ತಾರೆ.
ಆವಾಗ ‘ಖ್ಯಾತ ನಟ ರವಿಚಂದ್ರನ್ ಅಪಹರಣ’ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯು ಅವರು ಓದುತ್ತ ಕುಳಿತಿರುತ್ತಾರೆ. ‘ಇದೆಲ್ಲ ಇವನದ್ದೇ ಕೆಲಸ’ ಎಂದು ಮಾಸ್ಟರ್ ಆನಂದ್ ಕಡೆಗೆ ರವಿಚಂದ್ರನ್ ಕೈ ತೋರಿಸುತ್ತಾರೆ.
‘ಇದರಲ್ಲಿ ನಂದೇನೂ ಇಲ್ಲ. ಎಲ್ಲಾ ಪ್ಲಾನ್ ನಮ್ ಬಾಸ್ ಅವರದ್ದೇ’ ಅಂತ ಆನಂದ್ ಜಾರಿ ಕೊಂಡಾಗ ಹಿರಿಯ ನಟಿ ಲಕ್ಷ್ಮೀ ಎಂಟ್ರಿ ಕೊಡುತ್ತಾರೆ.rachita drama juniors
ಈ ದೃಶ್ಯದಲ್ಲಿ ನಮ್ಮ ಜೊತೆ ಸೇರಿದ್ದಕ್ಕೆ ತುಂಬ ಸಂತೋಷ, ಈಗ ಆರಾಮಾಗಿ ಕುಳಿತುಕೊಳ್ಳಿ. ಮುಂದೆ ಮಾತನಾಡೋಕೆ ಇನ್ನೂ ತುಂಬಾ ಇದೆ.
ಈಗ ಪ್ರಯಾಣ ಶುರು ಮಾಡೋಣ ಎಂದು ಲಕ್ಷ್ಮೀ ಹೇಳುತ್ತಾರೆ, ಈ ರೀತಿ ತುಂಬ ಇಂಟರೆಸ್ಟಿಂಗ್ ಆಗಿ ‘ಡ್ರಾಮಾ ಜ್ಯೂನಿಯರ್ಸ್ 4’ ಪ್ರೋಮೋ ತೆಗೆದಿದ್ದಾರೆ.
ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನಟಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ.
ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್ 4’ ಪ್ರಸಾರ ಶುರು ಆಗಲಿದ್ದು, ಶನಿವಾರ ಮತ್ತು ಭಾನುವಾರ ರಾತ್ರಿ 7.30 ಬಿತ್ತರ ಆಗುವ ಈ ಶೋ ನೋಡಲು ವೀಕ್ಷಕರು ಕಾಯುತಿದ್ದರೆ.
ಪ್ರೋಮೋ ನೋಡಿದ ಬಳಿಕ ವೀಕ್ಷಕರ ಕೌತುಕ ಹೆಚ್ಚಿದೆ, ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿಯಾಗಿದೆ.
ಇದೇ ಮೊದಲ ಬಾರಿಗೆ ‘ಡ್ರಾಮಾ ಜ್ಯೂನಿಯರ್ಸ್’ ಜಡ್ಜ್ ಸ್ಥಾನಕ್ಕೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಆಗಮಿಸಿರುವುದರಿಂದ ತುಂಬಾ ನಿರೀಕ್ಷೆ ಹೆಚ್ಚಿದೆ.