
latest news -Ganga worship by chief minister today
ಇಂದು ಕಬಿನಿ ಜಲಾಶಯಕ್ಕೆ ಗಂಗಾ ಪೂಜೆ ನೆರವೇರಿಸಿ ಬಾಗೀನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತ್ತು ಇತರರು ಉಪಸ್ಥಿತರಿದ್ದರು.
ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.
latest news-ನಿರ್ಮಾಣ
ಕಬಿನಿ ಅಣೆಕಟ್ಟನ್ನು ೧೯೭೪ ರಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಬಳಿ ಕಟ್ಟಲು ಕಾರ್ಯ ಆರಂಭವಾಯಿತು.
ಉಪಯೋಗ
ಕಬಿನಿ ಅಣೆಕಟ್ಟನ್ನು ಸಾಗರೆದೊಡ್ಡಕೆರೆ (ಹುಲ್ಲುಮಲೆ ಗ್ರಾಮ) ಮತ್ತು ನುಗು (ಸಂಬೇಗೌಡನಹಳ್ಳಿ ಗ್ರಾಮ) ಎಂಬ ಎರಡು ಭಾಗವಾಗಿ ವಿಂಗಡಿಸಲಾಗಿದೆ.
ವಿಸ್ತೀರ್ಣ
ಉದ್ದ: ೩೯೪೦ ಮೀಟರ್ (೧೨೯೨೭ ಅಡಿ)
ಎತ್ತರ: ೨೦.೧೧೬೮ ಮೀಟರ್ (೧೬೬ ಅಡಿ)
ಅಗಲ: ೬೯೬ ಮೇಟರ್ (೨೨೮೩.೪೬ ಅಡಿ)
ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೨೮ ಟಿ ಎಂಸಿ)
ಗೇಟುಗಳು: ೪
ಅಚ್ಚುಕಟ್ಟು ಪ್ರದೇಶ: ೨೧೪೧.೯೦ ಚದರ ಕಿಮೀ.
ಮುಳುಗಡೆ ಪ್ರದೇಶ: ೪೬ ಹಳ್ಳಿಗಳು
latest news-ಉದ್ದೇಶಗಳು
ಕಬಿನಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ – ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಸ್ವಾರಸ್ಯ-latest news -Ganga worship by chief minister today
ಮೈಸೂರು ಮಹಾರಾಜರ ಆಡಳಿತದಲ್ಲಿ ಕಬಿನಿ ವನ್ಯಮೃಗಗಳ ಬೇಟೆಗೆ ಹೆಸರುವಾಸಿಯಾಗಿತ್ತು. ಕಬಿನಿ ಜಲಾಶಯದ ಬಳಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಂಚೇಗೌಡನಹಳ್ಳಿ, ಕುಪ್ಪೆ ಬೆಟ್ಟ ಇವೇ ಮುಂತಾದ ವನ್ಯಮೃಗಗಳ ತಾಣಗಳಿವೆ.
ಕಬಿನಿ ಜಲಾಶಯ | |
---|---|
Country | ಭಾರತ |
Location | ಮೈಸೂರು ಜಿಲ್ಲೆ |
Coordinates | ಟೆಂಪ್ಲೇಟು:Coord 11o 50′ 30″ N E |
Purpose | ನೀರಾವರಿ, ಕುಡಿಯುವ / ನೀರು ಸರಬರಾಜು |
Construction began | ೧೯೭೪ |
Owner(s) | ಕರ್ನಾಟಕ ಸರ್ಕಾರ |
Operator(s) | ಕರ್ನಾಟಕ ಸರ್ಕಾರ ನೀರಾವರಿ ಇಲಾಖೆ/ಲೋಕೋಪಯೋಗಿ ಇಲಾಖೆ |
Dam and spillways | |
Type of dam | ಮಣ್ಣಿನ / ಗ್ರಾವಿಟಿ ಅಣೆಕಟ್ಟು |
Height (thalweg) | ೧೬೬ ಅಡಿ |
Length | ೧೨೯೨೭ ಅಡಿ (೬೯೬ ಮೀಟರ್) |
Width (crest) | ೨೧೪೧.೯ ಚದರ ಅಡಿ |
Width (base) | ೨೫೦ ಅಡಿ |
Spillways | ೪ |
Spillway type | ರೇಡಿಯಲ್ |
Total capacity | ೨೮ ಟಿ ಎಂ ಸಿ |

ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಇದು ಸರ್ಗೂರು ಪಟ್ಟಣದ ಹತ್ತಿರ ಬೃಹತ್ ಕಬಿನಿ ಆಣೆಕಟ್ಟಿನಲ್ಲಿ ಅದರ ನೀರು ಸಂಗ್ರಹಿಸಲಾಗುತ್ತದೆ . ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿ ಬಹಳ ಹೇರಳವಾಗಿರುತ್ತವೆ. ಕಬಿನಿ ಅಣೆಕಟ್ಟಿನ ಉದ್ದ ೨.೨೮೪ ಅಡಿ (೬೯೬ ಮೀ), ೧೯.೫೨ ಟಿಎಂಸಿರಷ್ಟು ನೀರನ್ನು ಒಟ್ಟು ಶೇಖರಿಸಬಹುದು, ಆದರೆ ಹೂಳು ಸಂಗ್ರಹಗೊಳ್ಳುವ ಕಾರಣ ನೀರು ಗಣನೀಯವಾಗಿ ಕಡಿಮೆಯಾಗುತ್ತಿದೆ.
ಕಬಿನಿ ಅಣೆಕಟ್ಟು ಮೈಸೂರು ಜಿಲ್ಲೆಯ ಹೆಗ್ಗದದೇವನ ಕೋಟೆ ತಾಲ್ಲೂಕಿನ ಸರ್ಗೂರು ಪಟ್ಟಣದಿಂದ ೧೭ ಕಿ.ಮೀ. (೧೧ ಮೈಲು) ಮತ್ತು ೬ ಕಿ.ಮೀ. (೪.೫ ಮೈಲು) ದೂರದ ಗ್ರಾಮಗಳಾದ ಬಿಚ್ಚನಹಳ್ಳಿಯ ಮತ್ತು ಬಿದರಹಳ್ಳಿಯ ನಡುವೆ ಸ್ಥಾಪಿತವಾಗಿದೆ.